Sunday, July 19, 2015

ಸಾರ್ವಜನಿಕ ಗಣೇಶೋತ್ಸವ ಸಮಿತಿ (ರಿ ) - ಜನರೊಂದಿಗೆ ಶಾಸಕರು ಕಾರ್ಯಕ್ರಮ

ಮಾನ್ಯ ನಗರಾಭಿವ್ರದ್ಧಿ ಸಚಿವರು ಹಾಗೂ ಕಾಪು ವಿಧಾನಸಭಾ ವಿನಯಕುಮಾರ್ ಸೊರಕೆಯವರೊಂದಿಗೆ ಸಾರ್ವಜನಿಕ ಗಣೇಶೋತ್ಸವ ಸಮಿತಿ (ರಿ ) ಇದರ ಸದಸ್ಯರು ಇಂದು ಬೆಳಿಗ್ಗೆ ಅಲೆವೂರಿನ ಅಭಿವ್ರದ್ದಿಯ ಬಗ್ಗೆ ಹಾಗೂ ಸಮಿತಿಯ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಅಲೆವೂರಿನ ಸಮಸ್ತ ಅಭಿವ್ರದ್ದಿಗೆ ಪೂರಕವಾಗಿ "ಜನರೊಂದಿಗೆ ಶಾಸಕರು" ಎಂಬ ಕಾರ್ಯಕ್ರಮವನ್ನು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸೇವಾ ಕಾರ್ಯಾಲಯದಲ್ಲಿ 09-08-2015 ರಂದು ಬೆಳ್ಳಿಗೆ 10:30 ಘಂಟೆಗೆ ನಡೆಸಲು ಸಚಿವರು ಸಮ್ಮತಿಸಿದರು.
ಅಲೆವೂರಿನ ನಾಗರೀಕರು, ಸಮಿತಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದು ವಿನಂತಿ. ಈ ಜನಸಂಪರ್ಕ ಸಭೆಯಲ್ಲಿ ತಮ್ಮ ಸಮಸ್ಯೆಗಳನ್ನು ಪ್ರಸ್ಥಾವಿಸಬಹುದು ಹಾಗೂ ಸಲಹೆ ಸೂಚನೆಗಳನ್ನು ನೀಡಬಹುದು.
ಹೆಚ್ಚಿನ ಮಾಹಿತಿಗೆ ಸಮಿತಿಯ ಅಧ್ಯಕ್ಷರಾದ ಮಂಜೇಶ್ ಕುಮಾರ್ (8970991616) ಇವರನ್ನು ಸಂಪರ್ಕಿಸಬಹುದು.