Thursday, September 10, 2015

Competitions for Primary and Higher Primary School Children

ಸಮಿತಿಯು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪ್ರೌಡಶಾಲಾ ಹಾಗೂ ಪ್ರಾಥಮಿಕ ಶಾಲಾ ಮಕ್ಕಳಿಗೆ ದಿನಾಂಕ 13.09.2015 ರ ಭಾನುವಾರ ವಿವಿಧ ಸ್ಫರ್ಧೆಗಳನ್ನು ಆಯೋಜಿಸಲಾಗಿದೆ. ಆಸಕ್ತರು ತಮ್ಮ ಶಾಲಾ ಪ್ರಮಾಣ ಪತ್ರದ ಮುಖೇನ  ಸ್ಫರ್ಧೆಯಲ್ಲಿ ಭಾಗವಹಿಸಬಹುದು.

Monday, September 07, 2015

31ನೇ ವರುಷದ ಗಣೇಶೋತ್ಸವದ ಕರೆಯೋಲೆಯ ಅನಾವರಣ





ಕರ್ನಾಟಕ ಘನ ಸರಕಾರದ ನಗರಾಭಿವೃದ್ದಿ ಸಚಿವರೂ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ  ಸನ್ಮಾನ್ಯ ವಿನಯ್ ಕುಮಾರ್ ಸೊರಕೆ ಇವರು ಸಮಿತಿಯ ಸಹಯೋಗದೊಂದಿಗೆ ದಿನಾಂಕ 09.08.2015ರಂದು ನಡೆಸಲ್ಪಟ್ಟ " ಜನರೊಂದಿಗೆ ಸಚಿವರು " ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನತೆಯ ಅಹವಾಲುಗಳನ್ನು ಸ್ವೀಕರಿಸುವ ಪಕ್ಷಿನೋಟ.



Sunday, July 19, 2015

ಸಾರ್ವಜನಿಕ ಗಣೇಶೋತ್ಸವ ಸಮಿತಿ (ರಿ ) - ಜನರೊಂದಿಗೆ ಶಾಸಕರು ಕಾರ್ಯಕ್ರಮ

ಮಾನ್ಯ ನಗರಾಭಿವ್ರದ್ಧಿ ಸಚಿವರು ಹಾಗೂ ಕಾಪು ವಿಧಾನಸಭಾ ವಿನಯಕುಮಾರ್ ಸೊರಕೆಯವರೊಂದಿಗೆ ಸಾರ್ವಜನಿಕ ಗಣೇಶೋತ್ಸವ ಸಮಿತಿ (ರಿ ) ಇದರ ಸದಸ್ಯರು ಇಂದು ಬೆಳಿಗ್ಗೆ ಅಲೆವೂರಿನ ಅಭಿವ್ರದ್ದಿಯ ಬಗ್ಗೆ ಹಾಗೂ ಸಮಿತಿಯ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಅಲೆವೂರಿನ ಸಮಸ್ತ ಅಭಿವ್ರದ್ದಿಗೆ ಪೂರಕವಾಗಿ "ಜನರೊಂದಿಗೆ ಶಾಸಕರು" ಎಂಬ ಕಾರ್ಯಕ್ರಮವನ್ನು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸೇವಾ ಕಾರ್ಯಾಲಯದಲ್ಲಿ 09-08-2015 ರಂದು ಬೆಳ್ಳಿಗೆ 10:30 ಘಂಟೆಗೆ ನಡೆಸಲು ಸಚಿವರು ಸಮ್ಮತಿಸಿದರು.
ಅಲೆವೂರಿನ ನಾಗರೀಕರು, ಸಮಿತಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದು ವಿನಂತಿ. ಈ ಜನಸಂಪರ್ಕ ಸಭೆಯಲ್ಲಿ ತಮ್ಮ ಸಮಸ್ಯೆಗಳನ್ನು ಪ್ರಸ್ಥಾವಿಸಬಹುದು ಹಾಗೂ ಸಲಹೆ ಸೂಚನೆಗಳನ್ನು ನೀಡಬಹುದು.
ಹೆಚ್ಚಿನ ಮಾಹಿತಿಗೆ ಸಮಿತಿಯ ಅಧ್ಯಕ್ಷರಾದ ಮಂಜೇಶ್ ಕುಮಾರ್ (8970991616) ಇವರನ್ನು ಸಂಪರ್ಕಿಸಬಹುದು.